ಶನಿವಾರ, ಅಕ್ಟೋಬರ್ 15, 2022

ಪುಣೆಯ ಕೋಟೆಗೆ ಲಗ್ಗೆ - ಹೆಜ್ಜೆ- ೧

     ಯೂಥ್ ಹಾಸ್ಟೆಲಿನ ಮೈಸೂರಿನ ಗಂಗೋತ್ರಿ ಘಟಕದ ಸದಸ್ಯರು ಪೂನಾದ ಕೋಟೆಗೆ ಲಗ್ಗೆ ಇಟ್ಟ ಸುದ್ದಿಯ ಸವಿವರಗಳ ನೋಟ: ತಾರೀಕು ೭.೧೦.೨೨ರಂದು ಮೈಸೂರು ನಿಜಾಮುದ್ದೀನ್ ಸ್ವರ್ಣಜಯಂತಿ ರೈಲಿನಲ್ಲಿ ರಾತ್ರಿ ೮.೧೦ಕ್ಕೆ ೬೨ ಮಂದಿ ಪೂನಾ ಕಡೆಗೆ ಹೊರಟೆವು. ೩೨ ಮಂದಿ ಹೆಂಗಸರು, ೩೦ ಮಂದಿ ಗಂಡಸರು. ಹೆಣ್ಣುಮಕ್ಕಳೇ ಗಟ್ಟಿಗಿತ್ತಿಯರು!

(ನಮ್ಮ ಚಾರಣದ ವಿವರ ಹೀಗಿದೆ:
೭-೧೦.೨೨ರಂದು ಹೊರಟು ೮.೧೦.೨೨ ಸಂಜೆ ಪೂನಾ ತಲಪುವುದು. ಮಳೌಲಿಯ (Malavli) ಯೂಥ್ ಹಾಸ್ಟೆಲಿನಲ್ಲಿ ವಾಸ್ತವ್ಯ.
.೧೦.೨೨ರಂದು ಬೆಳಗ್ಗೆ  ಗಂಟೆಗೆ ಹೊರಟು ಶಿವನೇರಿ ಕೋಟೆಗೆ ಹೊರಡುವುದು.ತದನಂತರ ಲೆನ್ಯಾದ್ರಿ ಬುದ್ದಿಸ್ಟ್ ಗುಹೆ, ಓಝರ್ ದೇವಾಲಯ(ಅಷ್ಟವಿನಾಯಕ ಗಣಪತಿ ಮಂದಿರ)ಕ್ಕೆ ಭೇಟಿ. ಯೂಥ್ ಹಾಸ್ಟೆಲ್ ವಾಸ್ತವ್ಯ.
೧೦.೧೦.೨೨. ಬೆಳಗ್ಗೆ ಗಂಟೆಗೆ ಹೊರಟು ಟಿಕೊನಾ ಕೋಟೆ, ಕೋರಿಗಢ ಕೋಟೆ, ಲೋನಾವಾಲಕ್ಕೆ ಭೇಟಿ. ಮಳೌವ್ಲಿ ಯೂಥ್ ಹಾಸ್ಟೆಲ್ ವಾಸ್ತವ್ಯ
೧೧.೧೦.೨೨ ಮಳೌವ್ಲಿ ಯೂಥ್ ಹಾಸ್ಟೆಲ್ ನಿಂದ ಬೆಳಗ್ಗೆ ೪ಕ್ಕೆ ಹೊರಟು ಮೈಸೂರು ನಿಜಾಮುದ್ದೀನ್ ಸ್ವರ್ಣಜಯಂತಿ ರೈಲಲ್ಲಿ ೬.೨೫ಕ್ಕೆ ಮೈಸೂರು ಕಡೆಗೆ ಪಯಣ. ೧೨ರಂದು ಬೆಳಗ್ಗೆ .೩೦ಕ್ಕೆ ಮೈಸೂರು ತಲಪುವುದು)
.
    ರಾತ್ರೆ ೮.೧೦ಕ್ಕೆ ಸರಿಯಾಗಿ ರೈಲು ಹೊರಟಿತು. ನಮ್ಮ ನಮ್ಮ ಆಸನದಲ್ಲಿ ನಾವು ಆಸೀನರಾದೆವು.  ಈ ದಿನ ವಿಶ್ವ ನಗು ದಿನ. ಸವಿತಾ ಲೋಕೇಶ್ ರೀಲು (ಬಿಡುವುದರಲ್ಲಿ‌) ಮಾಡಿ ಇನ್ಟಾಗ್ರಾಮಿನಲ್ಲಿ ಹಾಕುವುದರಲ್ಲಿ  ನಿಸ್ಸೀಮೆ. ಹಾಗೆ ಒಂದಷ್ಟು ಮಂದಿ ಹಾಡಿಗೆ ಕೈ ಮೈ ಕುಣಿಸಿ ರೀಲ್ ತಯಾರಿಸಿ ಹಾಕಿದಳು. ರವಿ ಬಾಹುಸಾರ್ ಇದ್ದಲ್ಲಿ ನಗುವಿಗೆ ಕೊರತೆ ಇಲ್ಲ. ನಾನು ಅಣ್ಣ ಬಾಂಡ್ ಆದರೆ ನೀವು ಅಕ್ಕ ಬಾಂಡ್. ನನ್ನನ್ನೂ ಮೀರಿಸುತ್ತೀರ ಎಂದು ಸವಿತಳಿಗೆ ಬಿರುದು ಕೊಟ್ಟರು. ೧೦ಗಂಟೆವರೆಗೂ ನಗು ಹರಟೆ ಹೊಡೆದು ನಕ್ಕು ನಲಿದು.ವಿಶ್ವನಗು ದಿನವನ್ನು ಸಾರ್ಥಕಗೊಳಿಸಿದೆವು. ಮೈಸೂರಿನ ಗಂಗಮ್ಮ ಅವರು ಕರಿಕಡುಬು, ಚಕ್ಕುಲಿ ಹಂಚಿದರು. ೧೦.೩೦ಗೆ ನಿದ್ರೆ

ಪೂನಾದೆಡೆಗೆ ರೈಲು ಪಯಣ

ಬೆಳಗ್ಗೆ ಗಂಟೆಗೆ ತಿಂಡಿ ಇಡ್ಲಿವಡೆ. ಚಟ್ನಿ. ಮಧ್ಯಾಹ್ನ ಜೋಳದರೊಟ್ಟಿ, ಬದನೆ ಎಣ್ಣೆಗಾಯಿ. ಹರಟೆ, ಹಾಡು,ನಗು, ಪುಸ್ತಕ ಓದು, ಇಸ್ಪೀಟ್, ಚೌಕಾಭಾರ ಆಟ ಹೀಗೆ ಹೊತ್ತು ಸರಿದದ್ದೇ ತಿಳಿಯಲಿಲ್ಲ. ಮಂಜುಳಾ ಪಾಟೀಲ್ ಚೌಕಾಭಾರ, ಹಗ್ಗದಾಟಕ್ಕೆ ಹಗ್ಗ ಎಲ್ಲ ತಂದಿದ್ದರು. ಸುಷ್ಮಾ ಹಾಗೂ ಸುಮಲತಾ ಎದುರು ಬದುರು ಕುಳಿತು ೧೨ ಗಂಟೆಗಳ ಕಾಲ ಗಹನ ಚಿಂತನ ನಡೆಸಿದರು.  ಅವರ ಮುಖಭಾವವನ್ನೇ ಗಮನಿಸುತ್ತ ಇದ್ದ ನಮಗೆ ಅವರು ಏನು ಮಾತಾಡಿರಬಹುದು ಎಂದು ಕುತೂಹಲದಿಂದ ಅವರನ್ನೇ ನೋಡುತ್ತಿದ್ದೆವು! ಸವಿತಾ ಮೆತ್ತಗೆ ಅವರ ಫೋಟೋ ಕ್ಲಿಕ್ಕಿಸಿ ರೀಲು ಹರಿ ಬಿಟ್ಟಳು! ದಾರಿಯುದ್ದಕ್ಕೂ ಹೊಲಗಳು, ಬೆಟ್ಟಗಳು ಹಸಿರಿನಿಂದಾವೃತವಾಗಿ ನೋಡಲು ಖುಷಿಯೆನಿಸುತ್ತಲಿತ್ತು.  

 ನಾಲ್ಕು ಬಗೆಯ ಒಣಹಣ್ಣುಗಳನ್ನು ೬೫ ಪೊಟ್ಟಣಗಳಿಗೆ ತುಂಬಿಸಿದೆವು. ಪೊಟ್ಟಣ ತುಂಬಿಸುವಾಗ ಬಾಯಿಗೆ ಹಾಕೋಣವೆಂದರೆ ಸಿಸಿ ಕ್ಯಾಮಾರಾದ ಕಾಟ. ಹಾಗಾಗಿ ಒಂದು ಹಣ್ಣನ್ನೂ ಬಾಯಿಗೆ ಹಾಕಿಕೊಳ್ಳಲಾಗದೆ ನಿರಾಸೆಯಾಯಿತು! ಹಾವೇರಿಯ ಗಂಗಮ್ಮ ಅವರೂ ನಮ್ಮೊಂದಿಗೆ ಕೈ ಜೋಡಿಸಿದರು. ಅವರ ಪರಿಚಯ (ಶಿರಡಿಗೆ ಹೊರಟವರು) ಸ್ನೇಹಕ್ಕೆ ತಿರುಗಿ, ನಮ್ಮನ್ನು ಹಾವೇರಿಗೆ ಆಹ್ವಾನಿಸಿದರು. ಅವರ ಮನೆ ವಿಶಾಲವಾಗಿದೆಯಂತೆ. ಅಲ್ಲಿದ್ದು, ಹಾವೇರಿಯನ್ನು ನೋಡಬಹುದು ಎಂಬ ಆತ್ಮೀಯತೆ ತೋರಿಸಿದರು. ಅವರು ಕರೆಯುವುದು ಹೆಚ್ಚೋ ನಾವು ಹೋಗುವುದು ಹೆಚ್ಚೊ ಎಂದು ಮುಂದೆ ಎಂದಾದರೊಂದು ದಿನ ನಾವು ಅವರಲ್ಲಿಗೆ ಹೋಗುವುದೆಂದು ತೀರ್ಮಾನಿಸಿದ್ದೇವೆ! ಅಷ್ಟರಲ್ಲಿ ಸಂಜೆ ನಾವು ಇಳಿಯುವ ಸಮಯ ಬಂದೇ ಬಂತು. ಸಂಜೆ ೪ಕ್ಕೆ ಪುಣೆ ತಲಪಿದೆವು




ಅಲ್ಲಿ ಇಳಿದು ಸ್ಥಳೀಯ ರೈಲಲ್ಲಿ ಮಳೌಲಿ ತಲಪಿದಾಗ .೪೫. ಪುಣೆಯಿಂದ ಹೊರಟ ರೈಲು ಒಟ್ಟು ೧೭ ನಿಲ್ದಾಣ ದಾಟುತ್ತದೆ. ನಾವು ೧೬ನೇ ನಿಲ್ದಾಣದಲ್ಲಿ ಇಳಿದೆವು. ಕೊನೆಯದು ಲೋನಾವಾಲಾ. ದಾರಿಯಲ್ಲಿ ಉದ್ದಕ್ಕೂ ಕಾಸ್ಮಿಕ್ ಹೂಗಳ (ಹಳದಿ) ನೋಟ ಬಲು ಚಂದವಾಗಿತ್ತು. 

 ಅಲ್ಲಿ ರೈಲು ನಿಲ್ದಾಣದ ಸಮೀಪವೇ ಇರುವ ಯೂಥ್ ಹಾಸ್ಟೆಲ್ ತಲಪಿದೆವು. ಮಂದಿ ಇರುವಂತ ಕೋಣೆಯಲ್ಲಿ ನಾವು (ಗೋಪಕ್ಕ,ಸುಮತಿ, ಮಂಜುಳಾಪಾಟೀಲ್, ಸರೋಜ, ರುಕ್ಮಿಣಿಮಾಲಾ) ಸೇರಿಕೊಂಡೆವು.ಬಿಸಿನೀರು ವ್ಯವಸ್ಥೆ ಇತ್ತು. ಸ್ನಾನಾದಿ ಮುಗಿಸಿ ಮಹಡಿಯ ಚಾವಡಿಯಲ್ಲಿ ಎಲ್ಲರೂ ಜಮಾವಣೆಗೊಂಡೆವು. ಅಲ್ಲಿ ಮರುದಿನದ ಚಾರಣದ ವಿವರ ಇತ್ಯಾದಿ ಮಾತುಕತೆಯಾಗಿ, ಚಾರಣಿಗರಿಂದ ಹಾಡು, ಚಾರಣಿಗ ದಂಪತಿಗಳಿಂದ ನಡಿಗೆ, ಹೆಣ್ಣುಮಕ್ಕಳಿಂದ ಬೆಕ್ಕಿನ ನಡಿಗೆ, ಯುವಕ ಯುವತಿಯರಿಂದ ಜುಂಬಾ ನರ್ತನ ಇತ್ಯಾದಿ ಪ್ರತಿಭಾ ಪ್ರದರ್ಶನ ಅನಾವರಣಗೊಂಡಿತು. ೧೦ ಗಂಟೆಗೆ ಊಟವಾಗಿ ನಿದ್ದೆ.

ಶಿವನೇರಿ ಕೋಟೆ (kusur, junnar, Maharashtra, 410502)

.೧೦.೨೨ರಂದು ಬೆಳಗ್ಗೆ ಗಂಟೆಗೆ ತಯಾರಾಗಿ ಬುತ್ತಿಗೆ ಪಲಾವ್ ತುಂಬಿಸಿಕೊಂಡೆವುಬಸ್ ಹಾಗೂ ವ್ಯಾನ್ ವ್ಯವಸ್ಥೆ ಮಾಡಿದ್ದರು.  ನಾವು ೧೭ ಮಂದಿ ವ್ಯಾನ್ ಹತ್ತಿದೆವು. ಉಳಿದ ೪೫ ಮಂದಿ ಬಸ್ ಹತ್ತಿದರು. .೧೫ಕ್ಕೆ ಹೊರಟು .೧೫ಕ್ಕೆ ಶಿವನೇರಿ ತಲಪಿದೆವು.


 ವ್ಯಾನಿನಲ್ಲೇ ಪಲಾವ್ ತಿಂದೆವುಮೊದಲಿಗೆ  ಶಿವನೇರಿ ಕೋಟೆ ಏರಲು ತೊಡಗಿದೆವು.. ಏರಲು ಕಷ್ಟವೇನಿರಲಿಲ್ಲ. ಮೆಟ್ಟಲುಗಳಿವೆ. 

ಚೈನ್ ಗೇಟ್ ಎಂದು ಕರೆಯಲ್ಪಡುವ ಭಾಗದಿಂದ ಕೋಟೆಗೆ ಪ್ರವೇಶ ದ್ವಾರವಿದೆ. ಅಲ್ಲಿಂದ ಮುಂದಕ್ಕೆ ಸುರುಳಿಯಾಕಾರದ ಏಳು ದ್ವಾರಗಳಿವೆ. ಅದರ ಬಾಗಿಲುಗಳು ಭವ್ಯವಾಗಿವೆ. ಕೋಟೆಯ ಸುತ್ತಲೂ ಗೋಡೆಗಳಿವೆ.  ಕೋಟೆ ಮೇಲೆ ಅರಮನೆ ಈಗ ನಿರ್ನಾಮವಾಗಿದೆ. ಆನೆಲಾಯ ದೊಡ್ಡದಾಗಿದ್ದು, ಅರ್ಧ ಕುಸಿದಿದೆ, ಉಳಿದ ಭಾಗವನ್ನು ಚೆನ್ನಾಗಿ ನಿರ್ವಹಣೆ ಮಾಡಿದ್ದಾರೆ. ಮಾತೆಯ ದೇಗುಲ ನೋಡಿದೆವು. ಅಲ್ಲಿ ಭಜನೆ ನಡೆಯುತ್ತಲಿತ್ತು. 


ದಾರಿಯುದ್ದಕ್ಕೂ ಐದಾರು  ಕೊಳಗಳನ್ನು ಕಂಡೆವು. ಮೇಲ್ಗಡೆ ವಿಶಾಲವಾದ ಸ್ಥಳವಿದ್ದು, ಜೀಜಾಬಾಯಿ ಶಿವಾಜಿಯ ಮೂರ್ತಿ ಇದೆಬಾದಾಮಿ ಕೊಳವಿದೆ. ಎಲ್ಲ ನೋಡಿ ೧೨.೩೦ಗೆ ಕೆಳಗೆ ಇಳಿಯಲು ತೊಡಗಿ .೧೫ಕ್ಕೆ ಕೆಳಗೆ ಬಂದೆವು.








 ಮಹಾರಾಷ್ಟ್ರದ ಪುಣೆ ಜಿಲ್ಲೆಯ ಜುನ್ನಾರ್ ಬಳಿ ಇರುವ ಶಿವನೇರಿ ಕೋಟೆ ೧೭ನೇ ಶತಮಾನದ್ದು. ಶಿವಾಜಿ ೧೯ ಫೆಬ್ರವರಿ ೧೬೩೦ರಂದು ಇಲ್ಲಿಯೇ ಜನ್ಮತಾಳಿರುವುದು.  ಬಾಲ್ಯದ ಕೆಲವು ವರ್ಷಗಳ ಕಾಲ ಅಲ್ಲಿಯೇ ಕಳೆದರು. ಅಲ್ಲಿ ಶಿವಾಜಿಯದ್ದೆಂದು ಹೇಳಲಾಗುವ ತೊಟ್ಟಿಲು ಕಾಣಬಹುದು.  




 ಮೂರನೇ ಆಂಗ್ಲೋ – ಮರಾಠ ಯುದ್ಧದ ತರುವಾಯ ೧೮೨೦ರಲ್ಲಿ ಈ ಕೋಟೆಯು ಬ್ರಿಟಿಷ್ ಆಳ್ವಿಕೆಗೆ ಒಳಪಟ್ಟಿತು.

  ೨೦೨೧ರಲ್ಲಿ ಈ ಕೋಟೆಯನ್ನು ಮರಾಠ ಮಿಲಿಟರಿ ವಾಸ್ತುಶಿಲ್ಪದ ಸರಣಿಯ ಭಾಗವಾಗಿ  ಯುನೆಸ್ಕೋ ವಿಶ್ವಪರಂಪರೆಯ ತಾಣಗಳ ತಾತ್ಕಾಲಿಕ ಪಟ್ಟಿಗೆ ಸೇರಿಸಲಾಯಿತು. ಮಹಾರಾಷ್ಟ್ರದಲ್ಲಿ ಒಟ್ಟು ೩೭೬ ಕೋಟೆಗಳಿವೆ ಎಂದು ಗೂಗಲಿನಲ್ಲಿ ಮಾಹಿತಿ ಸಿಕ್ಕಿತು. ಆ ಎಲ್ಲ ಕೋಟೆಗಳನ್ನು ಹತ್ತಲು ಈ ಜನ್ಮಸಾಕಾಗದು!

ಲೆನ್ಯಾದ್ರಿ ಗುಹೆ (lenyadri Ganapati raod, Junnar, maharAdshtra 410502)

ಅಲ್ಲಿಂದ ಲೆನ್ಯಾದ್ರಿಗೆ ಹೋದೆವು. ಗಂಟೆಗೆ ದೇವಸ್ಥಾನ ವತಿಯಿಂದ ಸಿಗುವ ಊಟ (ರೂ.೨೫ರ ಟೋಕನ್ ಪಡೆಯಬೇಕು.) ಮಾಡಿದೆವು. ಅನ್ನ ಸಾರು, ಸಾಂಬಾರು, ಕೇಸರಿಭಾತ್.

      ಸುಮಾರು ೨೮೩ ಮೆಟ್ಟಲು ಹತ್ತಿ ೩೯೦ಡಿ ಎತ್ತರದಲ್ಲಿರುವ ಗುಹಾ ಗಣಪತಿ ದೇಗುಲ ತಲಪಿದೆವು. ೭ನೇ ಗುಹೆಯ ಬಂಡೆಯಡಿಯಲ್ಲಿ ವಿಶಾಲವಾದ ಸ್ಥಳದಲ್ಲಿ ಗಣಪತಿ ದೇಗುಲ ಇದೆ.. ನೂರಾರು ಜನ ಕೂರಬಹುದು. ಮಹಾರಾಷ್ಟ್ರದಲ್ಲಿರುವ ಅಷ್ಟ ವಿನಾಯಕ ದೇಗುಲಗಳಲ್ಲಿ ಈ ದೇಗುಲವೂ ಒಂದು. ಇದು ಗಣೇಶನ ಜನ್ಮಸ್ಥಳವೆಂದೂ ಉಲ್ಲೇಖವಿದೆ. ಪಾರ್ವತಿಯು ಲೆನ್ಯಾದ್ರಿಯಲ್ಲಿ ೧೨ ವರ್ಷಗಳ ಕಾಲ ಗಣೇಶನನ್ನು ಧ್ಯಾನಿಸುತ್ತ ತಪಸ್ಸನ್ನಾಚರಿಸಿದಳು. ಅವಳ ತಪಸ್ಸಿಗೆ ಮೆಚ್ಚಿದ ಗಣೇಶ ಆಕೆಯ ಮಗನಾಗಿ ಜನಿಸುವ ವರ ನೀಡುತ್ತಾನೆ. ಅದರಂತೆ ಪಾರ್ವತಿ ಮಣ್ಣಿನ ಗಣಪನನ್ನು ನಿರ್ಮಿಸಿ ಪೂಜಿಸಿದಾಗ, ಆ ಗಣೇಶ ಜೀವತಳೆದನು ಎಂಬುದು ಕಥೆ.  


ಇಲ್ಲಿ ಸುಮಾರು ೨೬ ಗುಹೆಗಳು ಇವೆ. ಕ್ರಿ.ಶ. ೧ ಮತ್ತು ೩ನೇ ಶತಮಾನದ ನಡುವೆ ಈ ಗುಹೆಗಳು ಇದ್ದು, ಹೀನಯಾನ ಬೌದ್ಧ ಸಂಪ್ರದಾಯಕ್ಕೆ ಸೇರಿವೆ ಎಂಬ ಉಲ್ಲೇಖವಿದೆ. ನಾವು ನಾಲ್ಕೈದು ಗುಹೆಗೆ ಹೋದೆವು. ಪ್ರಾರ್ಥನಾ ಮಂದಿರ, ಸಂನ್ಯಾಸಿಗಳ ನಿವಾಸಗಳು, ಬಂಡೆಯಡಿಯಲ್ಲಿ ನೀರಿನ ತೊಟ್ಟಿ ಕಂಡೆವು. ಬಂಡೆಯಿಂದ ನೀರು ತೊಟ್ಟಿಕ್ಕುತ್ತಲಿತ್ತು. ಗುಹಾ ನೋಡಿ ನಾವು ಕೆಳಗೆ ಬಂದೆವು. ಅಲ್ಲಿ ಚಹಾ ಕಾಫಿ ಕುಡಿದು ಹೊರಟೆವು.






ಪುಣೆಯಲ್ಲಿ ಅಷ್ಟ ಗಣಪತಿ ದೇಗುಲಗಳಿವೆಯೆಂದು ನಮ್ಮ ಮಾರ್ಗದರ್ಶಿ  ೭೧ ವರ್ಷದ ಸೋಪನ್ ಕೇನಟ್ (Sopan Khenat) ಹೇಳಿದರು. ಅವರು ಭಾರತ್ ಪೆಟ್ರೋಲಿಯಮ್ ನಲ್ಲಿ ಕೆಲಸದಲ್ಲಿದ್ದು, ನಿವೃತ್ತಿ ಹೊಂದಿ, ಈಗ ಪ್ರವೃತ್ತಿಯಾಗಿ ಸಹ್ಯಾದ್ರಿ ಟ್ರೆಕ್ಕಿಂಗ್  ಎಂಬ ಸಂಸ್ಥೆಯಲ್ಲಿ ಕಳೆದ ೩೫ ವರ್ಷದಿಂದ ಸೇವೆ ಸಲ್ಲಿಸುತ್ತಿರುವರು. ಪೂನಾದಲ್ಲಿರುವ ಕೋಟೆ, ಬೆಟ್ಟ ಇತ್ಯಾದಿ ಎಲ್ಲ ಕಡೆಗೆ ಭಾನುವಾರದಂದು ಚಾರಣ ಕರೆದುಕೊಂಡು ಹೋಗುತ್ತಾರಂತೆ. ಅವರ ಸಂಪರ್ಕ ಸಂಖ್ಯೆ  ೯೯೨೩೪೯೩೯೫೭. ಅವರ ಮನೆ ವಿಶಾಲವಾಗಿದೆಯಂತೆ. ಶನಿವಾರ ಭಾನುವಾರ ಅಲ್ಲಿಗೆ ಬಂದರೆ ಅವರು ಕೋಟೆಗಳಿಗೆ ಕರೆದೊಯ್ಯುವರಂತೆ. ನಮಗೆ ಅವರಲ್ಲಿಗೆ ಬರಲು ಆದರದ ಆಮಂತ್ರಣವಿತ್ತರು. ಅವರ ಈ ಪ್ರೀತಿಗೆ ನಮೋ ನಮಃ.
ವಿಘ್ನೇಶ್ವರ ದೇಗುಲ, ಓಝರ್.

 ಓಝರ್ ಕುಕಾಡಿ  ನದಿ ದಂಡೆಯಲ್ಲಿರುವ  ಗಣಪತಿ ದೇಗುಲದ ಬಳಿ ಇಳಿದಾಗ ಸಂಜೆ ಗಂಟೆ. ಸೂರ್ಯ ತನ್ನ ಪಾಳಿ ಮುಗಿಸಿ ಅಸ್ತಂಗತನಾಗುವ ತಯಾರಿಯಲ್ಲಿದ್ದ ಆ ಸುಂದರ ದೃಶ್ಯ ನೋಡುತ್ತ ನಿಂತೆವು. ನದಿಯ ಹಿನ್ನೀರಿನಲ್ಲಿ ಒಂದು ಜೋಡಿ ಮೀನು ಹಿಡಿಯಲು ದೋಣಿಯಲ್ಲಿ ಸಾಗುವುದನ್ನು ಪಟ ಕ್ಲಿಕ್ಕಿಸಿದೆ. ನದಿಯಲ್ಲಿ ದೋಣಿ ವಿಹಾರವೂ ಇದೆಯೆಂದು ತೋರುತ್ತದೆ.





   ವಿಘ್ನೇಶ್ವರ ದೇಗುಲಕ್ಕೆ ಹೋದೆವು. ಈ ದೇಗುಲ ಬಹಳ ಖ್ಯಾತಿ ಹೊಂದಿದೆಯೆಂದು ಮೇಲ್ನೋಟಕ್ಕೆ ಗೋಚರಿಸಿತು. ದೊಡ್ಡದಾದ ಮೂರು ಯಾತ್ರಿ ನಿವಾಸಗಳು ಅಲ್ಲಿದ್ದುವು.

   ಪೋರ್ಚುಗೀಸರಿಂದ ವಸಾಯಿ ಕೋಟೆಯನ್ನು ವಶಪಡಿಸಿಕೊಂಡ ಮೇಲೆ ಪೇಶ್ವೆ ಬಾಜಿ ರಾವ್ ಅವರ ಕಿರಿಯ ಸಹೋದರ ಮತ್ತು ಮಿಲಿಟರಿ ಕಮಾಂಡರ್ ಚಿಮಾಜಿ ಅಪ್ಪಾ ಈ ದೇವಾಲಯವನ್ನು ನವೀಕರಿಸಿದರು, ಮುಂದೆ ೧೯೬೭ರಲ್ಲಿ ಗಣೇಶ ಭಕ್ತ ಅಪ್ಪಾ ಶಾಸ್ತ್ರಿ ಜೋಶಿಯವರು ದೇಗುಲದ ಜೀರ್ಣೋದ್ಧಾರ ಮಾಡಿದರು.

   ದೇಗುಲದೊಳಗೆ ವಿಘ್ನೇಶನ ಉದ್ಭವ ಮೂರ್ತಿ ಇದೆ. ಹೊರಗೆ ಎರಡು ದೊಡ್ಡ ಕಲ್ಲಿನ ಕಂಬ ದೀಪಗೋಪುರಗಳು (ದೀಪಮಾಲೆ) ಆಕರ್ಷಕವಾಗಿವೆ. ಹೊರ ಆವರಣದಲ್ಲಿ ಸಂಗೀತ ಸೇವೆ ಸಲ್ಲಿಸಲು ಭಕ್ತರು ಸಜ್ಜಾಗಿ ಕೂತಿದ್ದರು.

    ದೇಗುಲ ನೋಡಿ ನಾವು ಮಳೌವ್ಲಿ ಕಡೆಗೆ ಪಯಣ ಬೆಳೆಸಿದೆವು. ಸುಮಾರು .೩೦ ಗಂಟೆ ದಾರಿ. ನಿದ್ದೆಯ ಗುಂಗಿನಲ್ಲಿ ನಾವಿದ್ದೆವು. ಆಗ ನಮ್ಮ ವ್ಯಾನಿಗೆ ಬಿರುಗಾಳಿ ಬೀಸಿದಂತೆ ಸವಿತಾ ಲೋಕೇಶ್ ಆಗಮನವಾಯಿತು. ಬಂದವಳೇ ರಾಜಕೀಯ ಭಾಷಣ ಆರಂಭಿಸಿಯೇ ಬಿಟ್ಟಳುನಾನೀಗ ಮುಖ್ಯಮಂತ್ರಿ ಆಕಾಂಕ್ಷೆಯಲ್ಲಿರುವೆ. ನೀವೆಲ್ಲ ನನಗೆ ಮತ ಹಾಕಬೇಕು. ಎಂದು ತಾಕೀತು ಮಾಡಿದಳು. ನಾವೆಲ್ಲ ಒಪ್ಪಿದೆವು.  ಅದಾಗಲೇ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿಯೇ ಬಿಟ್ಟಳು. ನಮಗೆಲ್ಲ ಒಂದೊಂದು ಖಾತೆಯನ್ನು ಹಂಚಿದಳುಮಂಕುಬಡಿದಂತೆ ಕೂತಿದ್ದ ನಮ್ಮ ಮೊಗದಲ್ಲಿ ಹರ್ಷ ಹುರುಪು ತುಂಬಿದಳು. ನಗುವಿನ ಕಟ್ಟೆ ಒಡೆದು ದುಮ್ಮಿಕ್ಕಿ ಹರಿದು ನಮ್ಮ ನಿದ್ದೆ ಮಂಕುತನ ಹಾರಿಹೋಯಿತು. ನಮ್ಮ ಮಾರ್ಗದರ್ಶಕರನ್ನೂ ಸುಮ್ಮನೆ ಕೂರಲು ಬಿಡಲಿಲ್ಲ. ಅವರಿಗೆ, ನೀವು ವಿರೋಧ ಪಕ್ಷದವರು ಎಂದಾಗ, ಯಾವ ಪಕ್ಷ ಎಂದು ಕೇಳಿದಾಗ, ಬಿಜೆಪಿ ಎಂದಳು ಸವಿತ. ವಿರೋಧವಾಗಲು ಅದೇಗೆ ಸಾಧ್ಯ, ಮೋದಿಯವರು ನಮ್ಮ ಅಚ್ಚುಮೆಚ್ಚಿನವರು. ನಾನು ಅವರ ಅಭಿಮಾನಿ ಎಂದಾಗ, ಸರಿ, ನಿಮಗೆ ಒಂದು ಖಾತೆ ಕೊಡಲಾಗುವುದು ಎಂದು ಪಕ್ಷಕ್ಕೆ ಸೇರಿಸಿಕೊಂಡಳು. ಮುಂದೆ ನೆಚ್ಚಿನ ಹಾಡು ಹಾಕಿ ಸವಿತ ಹಾಗೂ ಸಹಚರರು ಕುಣಿದು ಕುಪ್ಪಳಿಸಿದರು..ಹೀಗೆ ದಾರಿ ಸಾಗಿದ್ದೇ ತಿಳಿಯದಂತೆ ಸಮಯ ಸರಿಯಿತು. ಸವಿತ ಇದ್ದಲ್ಲಿ ನಗು ಮಾತಿಗೆ ಬರವಿಲ್ಲ. ಪಯಣದಲ್ಲಿ ಯಾರೂ ಬೇಸರಗೊಳ್ಳಲು ನಿದ್ದೆಗಿಳಿಯಲು   ಎಡೆಯಿಲ್ಲ!

ಅಂತೂ ೧೦ ಗಂಟೆಗೆ ನಾವು ಯೂಥ್ ಹಾಸ್ಟೆಲ್ ತಲಪಿದೆವುಊಟ ಮಾಡಿ, (ಚಪಾತಿ, ಎರಡು ಕೂಟಕ,ಕೇಸರಿಭಾತ್ಅನ್ನ ದಾಲ್, ಹಪ್ಪಳ) ಬಿಸಿ ನೀರು ಸ್ನಾನವಾಗಿ ನಿದ್ದೆ ಮಾಡಲು ಅನುವಾದಾಗ ೧೨ಗಂಟೆ.

(ಮಾಹಿತಿ ಕೃಪೆ: ವೀಕಿಪಿಡಿಯಾ)

ಮುಂದುವರಿಯುವುದು 

4 ಕಾಮೆಂಟ್‌ಗಳು:

  1. ನಿರೀಕ್ಷಿಸಿದ್ದಂತೆ, ಅಲ್ಪ ಅವಧಿಯಲ್ಲಿಯೇ,
    ಸೊಗಸಾದ ನಿಮ್ಮ ಅನುಭವಗಳ ಜೊತೆಗೆ, ಅವಶ್ಯ ವಿಷಯಗಳನ್ನೂ ಸಂಗ್ರಹಿಸಿ, ಉತ್ತಮ ಶೈಲಿಯಲ್ಲಿ ಚಿತ್ರಲೇಖನವನ್ನು ಓದುಗರಿಗೆ ಒದಗಿಸಿದ್ದೀರಿ.

    ಚೆನ್ನಾಗಿ ಮೂಡಿಬಂದಿದೆ. ನಿಮಗೆ ಅಭಿನಂದನೆಗಳು.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ. ನಿಮ್ಮ ನೇತೃತ್ವದಲ್ಲಿ ನಡೆದ ಈ ಚಾರಣ ಕಾರ್ಯಕ್ರಮ ಯಶಸ್ವಿಯಾಗಿತ್ತು.

      ಅಳಿಸಿ